ಇದು ಉತ್ತರಕರ್ನಾಟಕದ ಜನಪ್ರಿಯ ಖಾದ್ಯ.
ಬೇಕಾಗುವ ಸಾಮಾಗ್ರಿಗಳು:
ಬೇಕಾಗುವ ಸಾಮಾಗ್ರಿಗಳು:
- 2 ಕಪ್ ಶೇಂಗಾಕಾಳು
- 1/2 ಕಪ್ ಪುಟಾಣಿ/ಹುರಿಗಡಲೆ (ಬೇಕಾದಲ್ಲಿ)
- 8-10 ಸಿಪ್ಪೆ ತೆಗೆದ ಬೆಳ್ಳುಳ್ಳಿ
- 10-18 ಒಣಮೆಣಸಿನಕಾಯಿ
- 10 ಎಲೆ ಕರಿಬೇವು
- ಉಪ್ಪು ರುಚಿಗೆ
- ಸಣ್ಣ ಲಿಂಬೆ ಗಾತ್ರದ ಹುಣಸೆಹಣ್ಣು
ಮಾಡುವ ವಿಧಾನ:
- ಬಾಣಲೆಗೆ ಶೇಂಗಾಕಾಳು ಹಾಕಿ ಎಣ್ಣೆ ಹಾಕದೆ ಕೆಂಪಗೆ ಹುರಿದು , ಆರಲು ಬಿಡಿ.
- ಒಣಮೆಣಸಿನಕಾಯಿ ಸಣ್ಣಉರಿಯಲ್ಲಿ ಹುರಿಯಿರಿ,ಅದಕ್ಕೆ ಕರಿಬೇವು,ಬೆಳ್ಳುಳ್ಳಿ ಸೇರಿಸಿ.
- ಆರಿದ ಶೇಂಗಾಬೀಜವನ್ನು ಚೆನ್ನಾಗಿ ಉಜ್ಜಿ ಸಿಪ್ಪೆ ತೆಗೆಯಿರಿ.
- ಮಿಕ್ಸಿ ಜಾರಿನಲ್ಲಿ ಸಿಪ್ಪೆ ತೆಗೆದ ಶೇಂಗಾಕಾಳು,ಪುಟಾಣಿ,ಬೆಳ್ಳುಳ್ಳಿ,ಕರಿಬೇವು,ಒಣಮೆಣಸು,ಉಪ್ಪು,ಹುಣಸೆಹಣ್ಣು ಎಲ್ಲವನ್ನು ಹಾಕಿ ರುಬ್ಬಿ.ಸ್ವಲ್ಪ ತರಿತರಿಯಾಗಿರಲಿ.
- ಜೋಳದ ರೊಟ್ಟಿ,ಮೊಸರು ಜೊತೆ,ದೋಸೆಯ ಮೇಲೆ ಉದುರಿಸಲು,ಪ್ರಯಾಣ ಮಾಡುವಾಗ ಬಳಸಲು ಚೆನ್ನಾಗಿರುತ್ತದೆ.
- ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟರೆ 2 ತಿಂಗಳು ಮೇಲ್ಪಟ್ಟು ಇಡಬಹುದು.
ಟಿಪ್ಸ್:
- ರುಬ್ಬುವಾಗ -ಒಂದೇ ಸಲಕ್ಕೆ ರುಬ್ಬಬೇಡಿ,ನಿಲ್ಲಿಸಿ ನಿಲ್ಲಿಸಿ ರುಬ್ಬಿ.ಇಲ್ಲವಾದಲ್ಲಿ ಶೇಂಗಾಕಾಳು ಎಣ್ಣೆ ಬಿಟ್ಟು ಪೇಸ್ಟ್ ರೀತಿ ಆಗುತ್ತದೆ.
- ಒಣಮೆಣಸಿನ ಬದಲು ಖಾರದ ಪುಡಿ ಬಳಸಬಹುದು.ಮನೆಯಲ್ಲೆ ತಯಾರಿಸಿದ ಖಾರದ ಪುಡಿಯಾದಲ್ಲಿ ರುಚಿ ಹೆಚ್ಚುತ್ತದೆ.
- ಬ್ಯಾಡಗಿ ಮೆಣಸು ಬಣ್ಣಕ್ಕೆ,ಗುಂಟೂರು ಮೆಣಸು ಖಾರಕ್ಕೆ ಬಳಸಬಹುದು.
No comments:
Post a Comment